Thursday, July 1, 2021

ರಂಗ ಶಿಕ್ಷಕರ ನೇಮಕಾತಿ ಕೋರಿ ಸಚಿವರಿಗೆ ಮನವಿ

ನಾಟಕ ಅಕಾಡೆಮಿ ಹಾಗೂ ರಂಗಾಯಣಗಳ ನೇತೃತ್ವದ ರಂಗಕರ್ಮಿಗಳ ನಿಯೋಗ ಇಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್ ಸುರೇಶಕುಮಾರ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ರಂಗ ಶಿಕ್ಷಕರ ನೇಮಕಾತಿ ಕುರಿತಂತೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.. ಈ ಸಂದರ್ಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ನಾಟಕ ಅಕಾಡೆಮಿ ಅದ್ಯಕ್ಷರಾದ ಆರ್ ಭೀಮಸೇನ , ಅಕಾಡೆಮಿ ಸದಸ್ಯರಾದ ಪ್ರಭುದೇವ ಕಪ್ಪಗಲ್ಲು ,ರಂಗ ಕರ್ಮಿಗಳಾದ ಡಾ.ಬಿವಿ ರಾಜರಾಮ್,ಮೈಸೂರು ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ,ಕಲಬುರ್ಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ, ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಸಂದೇಶ ಜವಳಿ ಮತ್ತಿತರ ರಂಗಕರ್ಮಿಗಳು ಉಪಸ್ಥಿತರಿದ್ದರು.. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವದೆಂದು ಭರವಸೆ ನೀಡಿದರು.

No comments:

Post a Comment